Posts

Showing posts from June 9, 2021

ಬ್ರಾಹ್ಮಣ್ಯ ಮತ್ತು ಭಾರತ

ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಮಾತಿದು, "ನಾವು ಬ್ರಾಹ್ಮಣ್ಯ ವನ್ನು ಒಪ್ಪೋದಿಲ್ಲ. ಅದರ ನಾಶವಾಗಬೇಕು"  ಲಿಂಗಾಯತ,  ವೀರಶೈವ, ಪಂಚಮಸಾಲಿ, ರೆಡ್ಡಿ, ಒಕ್ಕಲಿಗ, ಇನ್ನೂ ಹಿಂದುಳಿದ, ಮತ್ತು, ಪ.ಜಾ. ಪ.ಪಂ ಗಳಲ್ಲಿ ಎಷ್ಟೋ ಅವಾಂತರ ಜಾತಿಗಳಿವೆ, ಸರಕಾರಿ  ಲಿಸ್ಟ್ ತಗೆದು ನೋಡ್ರಪಾ ಎಷ್ಟು ಪ್ರಕಾರದ ಜಾತಿಗಳಿದಾವೆ ಅಂತ. ಈಗ ಚಾತುರ್ವರ್ಣ್ಯ ದಲ್ಲಿ ಇವೆಲ್ಲಾ ಜಾತಿಗಳು ಎಲ್ಲಿ ಸೇರ್ತವೋ? ಅವುಗಳನ್ನು ನಿರ್ಮಿಸಿದವರು ಯಾರೋ ? ಲಿಂಗಾಯತ ವೀರಶೈವ ಧರ್ಮದ ಸಂಸ್ಥಾಪಕರು ಯಾರು ಅಂತ ನಿಮಗೆ ಗೊತ್ತೇ ಇದೆ. ಹೋಗ್ಲಿ ಬ್ರಾಹ್ಮಣ್ಯ ನಾಶ ಆದ್ರೆ ಇದೆಲ್ಲಾ ನಾಶ ಆಗ್ತದೋ ? ಬ್ರಾಹ್ಮಣ್ಯ ನಾಶ ಮಾಡೋದು ಅಂದ್ರೇನು ? ಅದೊಂದು ಜೀವನಧರ್ಮ ಅದನ್ನು ನಾಶ ಮಾಡೋದಿಕ್ಕೆ ನೀವ್ಯಾರು? ಯಾರೋ ತಲೆ ಹಿಡುಕ ಸಾಹಿತಿನೋ ಕವಿನೋ ಅವಿವೇಕತನದಿಂದ ಏನೋ ಅಮಲಿನಲ್ಲಿ ಗೀಚಿದಾಂತ ಅದನ್ನೇ ಕಂಠಪಾಠ ಮಾಡಿ ಬ್ರಾಹ್ಮಣರ ನಿಂದನೆ ಮಾಡ್ತಾರೆ. ಬ್ರಾಹ್ಮಣರು ಇರೋದೇ ೨%. ನಿಮಗೆ ಅವರಿಂದ ತೊಂದರೆ ಆಗಿದ್ರೆ ಅವರನ್ನು ಬಹಿಷ್ಕರಿಸಿ. ಉಳಿದವರ ಸಂಖ್ಯೆ ೯೮%. ನೀವು ಒಗ್ಗಟ್ಟಾಗಿ, ಯಾರು ತಡೆದವ್ರು? ಯಾಕೆ ಒಗ್ಗಟ್ಟಾಗಿಲ್ಲ?  ಬ್ರಾಹ್ಮಣ ಯಾರ ತಂಟೆಗೆ ಬರೋದಿಲ್ಲ, ಅವರ ನಿಂದನೆ ಮಾಡೋ ಅಧಿಕಾರ ಯಾರಿಗೂ ಇಲ್ಲ. ನಮ್ಮ ಸಾಮರ್ಥ್ಯ ದಿಂದ ನಾವು ದುಡಿದು ತಿನ್ಕೋತೀವಿ, ನಮ್ಮ ದೇವರು, ನಮ್ಮ ದೇವಸ್ಥಾನಗಳಿಗೆ ಆರತಿ ತಟ್ಟೆಗೆ, ನೀವು ದುಡ್ಡು ಹಾಕಬೇಡಿ, ಹಾಕುವಂತೆ ನಾವ

सन्तति: शुद्धवंश्या हि परत्रेह च शर्मणे

 सन्तति: शुद्धवंश्या हि परत्रेह च शर्मणे । ನಮ್ಮ ದೇಶದ ಪ್ರಸಿದ್ಧ ಹಿಂದೂ ಸಂಘಟನೆಗಳ ಎಡಬಿಡಂಗಿತನ ಅವರಿಗೂ ಇರುವ ದುರುದ್ದೇಶ ಒಂದೇ ಬ್ರಾಹ್ಮಣ್ಯ ನಾಶ.ನಾವೆಲ್ಲ ವೇದ ಕಲೀತಿವಿ, ನಾವು ಎಲ್ಲ ಒಂದೇ. ಸರಿ ನಿಮಗೆ ವೇದ ಕಲಿಯೋದಿಕ್ಕೆ ನಮ್ಮ ಅಡ್ಡಿ ಇಲ್ಲ. ನಿಮಗೆ ಬೇಡ ಅನ್ನಲು ನಾವ್ಯಾರು? ಮ್ಯಾಕ್ಸ್‌‌ ಮುಲ್ಲರ್ ಓದಲಿಲ್ಲವೇ? ಓದಿದ, ಅವನನ್ನು ಮೋಕ್ಷ ಮುಲ್ಲರ್ ಅಂದ್ರು. ಅವನು ತನ್ನಿಂದ ಆದಷ್ಟು ವೈದಿಕ ಸಂಪ್ರದಾಯಕ್ಕೆ ಅಪಚಾರ ಮಾಡಿದ, ಬ್ರಾಹ್ಮಣರೆಲ್ಲ ವೇದ ಓದಿರುವರೇ ? ಇಲ್ಲ ಅವೈದಿಕ ಬ್ರಾಹ್ಮಣರೇ ಹೆಚ್ಚು. ಆದರೂ ಅಲ್ಪ ಸ್ವಲ್ಪ ವೈದಿಕ ಬ್ರಾಹ್ಮಣರು ನಿಮ್ಮ ಏಕತೆಗೆ ಪ್ರತಿಬಂಧಕರಾಗಿದ್ದಾರೆ ಅಂದ್ರೆ, ಒಪ್ಪಲಾಗದ ಮಾತು. ಹಿಂದೂಗಳಲ್ಲಿ ವೈದಿಕ ಬ್ರಾಹ್ಮಣರ ಸಂಖ್ಯೆ ಅತ್ಯಲ್ಪ. ವೇದ ಓದಿದರೂ ಅವರ ಮಟ್ಟಕ್ಕೆ ಏರಲಾಗದೇ, ಅವರ ಶುದ್ಧತೆಯಿಂದ ಉಂಟಾದ ಬ್ರಹ್ಮ ತೇಜಸ್ಸು ಕಂಡು ಹೊಟ್ಟೆ ಉರಿಯೇ? ನಿಮ್ಮ ಅಸಹನೆಗೆ ಕಾರಣ ಏನು?.  ಬ್ರಾಹ್ಮಣ ಜಾತಿ ನಾಶಮಾಡಿದ್ರೂ, ನಿಮ್ಮಲ್ಲಿ ಈಗ ಇರುವ ಇತರ ಜಾತಿ ವ್ಯಾಮೋಹದಿಂದ, ಭಾಷಾವ್ಯಾಮೋಹದಿಂದ, ಪ್ರಾದೇಶಿಕ ವ್ಯಾಮೋಹದಿಂದ ಬಂಧುತ್ವದ ವ್ಯಾಮೋಹದಿಂದ ಮುಕ್ತರಾಗಲು ಸಾಧ್ಯವೇ? ವ್ಯಾಮೋಹ, ಭೇದ ಮನುಷ್ಯ ಸಹಜ ಧರ್ಮ. ಎಲ್ಲಾ ವ್ಯಾಮೋಹಗಳೂ ಸಹ್ಯ ನಿಮಗೆ. ಯಾಕೆ? ಅದು ನಿಮ್ಮ ಸ್ವಾರ್ಥ. ಆದ್ರೆ ನಿಮ್ಮ ದುರುದ್ದೇಶ ಏನು ? ಬ್ರಾಹ್ಮಣ ಸಂತತಿ ಇರಕೂಡದು. ಅದನ್ನು ಭ್ರಷ್ಟಗೊಳಿಸಬೇಕು. ಅದರಿಂದ ಆಗುವ ಲಾಭವೇನೋ ತಿಳಿಯಲಿಲ್